ಭಾರತೀಯತೆ ಸಾರುವ ಕ್ರೈಂ , ಸಸ್ಪೆನ್ಸ್ ,ಮತ್ತು ಆಕ್ಷನ್ ಚಿತ್ರ
ಇಂದು ನಾವು ನಮ್ಮ ದೇಶದಲ್ಲಿ ನೆಮ್ಮಂದಿಯಿಂದ ಬದುಕುತ್ತಿದ್ದೇವೆ ಅಂದ್ರೆ ಅದಕ್ಕೆ ಕರಣ ಕಾಣದ ಕೈಗಳ ಕೆಲಸ. ಗಡಿಯಲ್ಲಿ ಕಾಯುವ ಯೋಧ ಇರಬಹದು, ಗುಪ್ತಚರ ಇಲಾಖೆಯ ಪ್ರತಿನಿದಿಗಳಿರಬಹುದು , ನಮ್ಮ ದೇಶದ ನೀರನ್ನು ಮತ್ತು ಆಗಸವನ್ನು ಕಾಯುವ ಪಡೆಗಳಿರಬಹುದು ಮತ್ತು ಪೊಲೀಸ್ ಇಲಾಖೆ ಇರಬಹುದು ಇವರೆಲ್ಲ ಧ್ಯೆಯ ಮತ್ತು ದೃಷ್ಟಿ ಶತ್ರುವನ್ನು ಬಗ್ಗಿಬಡಿಯುವುದು .
ಹೈನ ಒಂದು ವಿಶಿಷ್ಟ ಕ್ರೂರ ಪ್ರಾಣಿ… ಗುಂಪಿನಲ್ಲಿ ಬಂದರೆ ಸಿಂಹ , ಹುಲಿ ಎಂತಹ ಬಲಿಷ್ಠ ಕ್ರೂರ ಪ್ರಾಣಿಯನ್ನು ಬೇಟೆಯಾಡಬಲ್ಲ ಸಮರ್ಥ ಹೈನಕ್ಕೆ ಇದೆ. ಹೈನಕ್ಕೆ forest scavenger ಎಂದು ಕೂಡ ಕರೆಯುತ್ತಾರೆ. ಶತ್ರುಗಳು ನಮ್ಮ ತಂಟೆಗೆ ಬಂದ್ರೆ ಹೈನ ಪಡೆ ಸುಮ್ಮನೆ ಇರುವುದಿಲ್ಲ.
ಹೈನ ಒಂದು ವಿಭಿನ್ನ ಕಥೆಯ ಚಿತ್ರ , ಭಾರತೀಯತೆ, ದೇಶಪ್ರೇಮ , ನಾವು ದೇಶಕ್ಕಾಗಿ ಏನನ್ನು ಕೊಡಬಹುದು ಇವೆಲ್ಲ ಹೈನದಲ್ಲಿ ತೋರಿಸಲಾಗಿದೆ. ಪ್ರತಿ ಭಾರತೀಯ ತನ್ನ ತಾಯಿನಾಡಿಗೆ ಏನನ್ನು ಕೊಡಬಹುದು ಎಂದು ಹೇಳುವ ಚಿತ್ರ ಹೈನ
ಹೈನ ಕಥೆ ನಮ್ಮ ದೇಶ ಸೇವೆ ಮಾಡಿರುವ ವ್ಯಕ್ತಿಗಳನ್ನು ಬೇಟಿಮಾಡಿ (ಸಬ್ಜೆಕ್ಟ್ ಮ್ಯಾಟರ್ ಎಕ್ಸ್ಪರ್ಟ್ ) ಅವರಿಂದ ಸಲಹೆಗಳನ್ನು ಪಡೆದು ಒಂದು ಅದ್ಭುತವಾದ ಕಥೆ ಮಾಡಿ ಇವತ್ತು ಚಿತ್ರ ತೆರೆಗೆ ಸಿದ್ಧವಾಗಿದೆ
ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್ , Dr. ರಾಜ್ ಕಮಲ್ , ವೆಂಕಟ್ ಭಾರದ್ವಾಜ್ , ಲಾರೆನ್ಸ್ ಪ್ರೀತಮ್, ಹರ್ಷ್ ಅರ್ಜುನ್ ಕಲಾಲ್ , ದಿಗಂತ್ , ನಂದಕುಮಾರ್ , ಶಿಶಿರ್, ಮನೋಹರ್ ರಾಮಕುಮಾರ್ , ನೇತ್ರ ಗೋಪಾಲ್, ನಿರಂಜನ್ ,dr. ಪ್ರಮೋದ್ ಹಿರೇಮಠ್ ಮತ್ತು ಹಲವಾರು ಕಲಾವಿದರು ಮುಖ್ಯ ಪಾತ್ರಗಲ್ಲಿ ಕಾಣಿಸಿಕೊಡಿದ್ದಾರೆ. ಚಿತ್ರವೂ ತಯಾರಿದ್ದು ಅತಿ ಶೀಘ್ರದಲ್ಲಿ ತೆರೆಯಮೇಲೆ ಅಬ್ಬರಿಸಲಿದೆ
ಚಿತ್ರಕೆ ವೆಂಕಟ್ ಭರದ್ವಾಜ್ ರವರ ನಿರ್ದೇಶನ ವಿದೆ , ಲಕ್ಷ್ಮಣ್ ಶಿವಶಂಕರ್ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಒದಗಿಸಿದ್ದಾರೆ, ಲವ್ ಪ್ರಾನ್ ಮೆಹ್ತಾ ರವರ ಸಂಗೀತ , ನಿಶಾಂತ್ ನಾನಿ ಛಾಯಾಗ್ರಹಣ , ಶಮೀಕ್ ಭರದ್ವಾಜ್ ಸಂಕಲನ , ಮತ್ತು ಉತ್ತಮ ತಾಂತ್ರಿಕ ಸದ್ಯಸ್ಯರು ಚಿತ್ರಕ್ಕೆ ಸಾತ್ ಕೊಟ್ಟಿದ್ದಾರೆ… ಅಮೃತ ಫಿಲಂ ಸೆಂಟರ್ ಮತ್ತು ಕೆಕೆ ಕಂಬೈನ್ಸ್ ಚಿತ್ರಕ್ಕೆ ಹಣಹೂಡಿ ನಿರ್ಮಾಣ ಮಾಡಿದ್ದಾರೆ
ಪ್ರತಿ ಭಾರತೀಯ ಈ ಚಿತ್ರದ ರಾಯಭಾರಿ ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ಹೇಳಿದ್ದಾರೆ.