ಈಗಾಗಲೇ ಮೊದಲ ಹಂತದ ಮತದಾನ 2024ರ ಲೋಕಸಭಾ ಚುನಾವಣೆಗೆ ಮುಗ್ದಿದ್ದು ರಾಜಕೀಯ ವಲಯದಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಅಬ್ ಕಿ ಬಾರ್ ೪೦೦ ಪಾರ್ ಎಂಬ ಆಕಾಂಕ್ಷೆಯನ್ನು ಹೊತ್ತು ಭಾರತೀಯ ಜನತಾ ಪಾರ್ಟಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿರುಸಿನ ಪ್ರಚಾರವನ್ನು ಎಲ್ಲಾ ಕ್ಷೇತ್ರದಲ್ಲೂ ಮಾಡುತ್ತಾ ಬಂದಿದೆ.
ಮೊದಲನೇ ಹಂತ ಚುನಾವಣೆ ಮುಗಿದಿದ್ದು ಎರಡನೇ ಹಂತ ಇನ್ನೇನು ಮೂರು ದಿನಗಳಲ್ಲಿ ಚುನಾವಣೆ ಇದ್ದು ಪ್ರಧಾನಿ ಮೋದಿ ಅವರು ಇತ್ತೀಚೆಗೆ ರಾಜಸ್ಥಾನದ ತಮ್ಮ ಒಂದು ಭಾಷಣದಲ್ಲಿ ಕಾಂಗ್ರೆಸ್ನ ಮ್ಯಾನಿಫೆಸ್ಟ್ ಬಗ್ಗೆ ಅತಿ ತೀವ್ರವಾಗಿ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಅಕಸ್ಮಾತ್ ಅಧಿಕಾರ ಚುಕ್ಕಾಣಿಯನ್ನು ಹಿಡಿದರೆ ವೆಲ್ತ್ ಡಿಸ್ಟ್ರಿಬ್ಯೂಷನ್ ಅನ್ನೋ ನಿಟ್ಟಿನಲ್ಲಿ ಈ ದೇಶದ ಮೈನಾರಿಟಿಸ್ ಗೆ ಆರ್ಥಿಕ ಸಮಾನತೆಯನ್ನು ಸೃಷ್ಟಿಸಲು ಹೊರಟಿದೆ, ಇದಕ್ಕೆ ಅವಕಾಶ ಕೊಡಬಾರದು ಅನ್ನೋ ಪ್ರಧಾನಿಯವರ ಕೂಗು ಸಾಕಷ್ಟು ಕಮ್ಯುನಿಸ್ಟರ್ ನ ಹಾಗೂ ಅರ್ಬನ್ ನಕ್ಸಳ್ಲ್ರನ್ನಾ ನಿದ್ದೆ ಕೆಡಿಸಿದೆ.
ಇವರುಗಳ ನಿದ್ದೆ 2014 ರಿಂದನೇ ಕೆಟ್ಟಿದ್ದು, ಈಗ ಆಗಿರೋದು ಹೊಸದೇನಲ್ಲ ಆದರೆ ಸಾಮಾನ್ಯ ಜನ ಕೇಳ್ತಿರೋದು ಪ್ರಧಾನಿಗಳ ಈ ಒಂದು ಭಾಷಣ ಈ ಸಮಯದಲ್ಲಿ ಯಾಕೆ ಅನ್ನೋ ಪ್ರಶ್ನೆ? ಮೊದಲನೇ ಹಂತದಲ್ಲಿ ಭಾ. ಜ. ಪಾ. ಗೆ ಅಂದುಕೊಂಡಿರುವಷ್ಟು ಯಶಸ್ಸು ಸಿಕ್ಕಿಲ್ವಾ, ಅನ್ನೋ ಆತಂಕದ ಗುಟುರು ಪ್ರಾರಂಭವಾಗಿರಬಹುದು.
ಆದರೆ ನಿಜವಾಗಲೂ ಆತಂಕದ ಸ್ಥಿತಿ ಇದಿಯಾ?
ಇದು ನನ್ನ ಅನಿಸಿಕೆ, ಈ ಚುನಾವಣೆ ಮೋದಿಯವರು ನೇತೃತ್ವದಲ್ಲಿ ಈಗಾಗಲೇ ಎಲ್ಲ ರೀತಿಯ ಪೂರ್ವ ಸಮೀಕ್ಷೆ ಪ್ರಕಾರ ಬಾಜಪಾಗೆ ಸಂಪೂರ್ಣ ಬಹುಮತ ಸಿಗಲಿದೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದ್ದೆ, ಆದರೂ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಆರ್ಥಿಕ ಸಮಾನತೆ ಬಗ್ಗೆ ಉಲ್ಲೇಖ ಇದ್ದು ಅದರ ಬುಡವನ್ನು ಹುಡುಕಿಕೊಂಡು ಹೋದಾಗ ಅವರ ಪಕ್ಷ ಆಡಳಿತದಲ್ಲಿದ್ದಾಗ ಪೂರ್ವ ಪ್ರಧಾನಿ ಡಾ. ಸಿಂಗ್ ಅವರು ಆರ್ಥಿಕ ಸಮಾನತೆ ಬಗ್ಗೆ ಉಲ್ಲೇಖ ಮಾಡಿದ್ದು ಈಗ ಕಂಡು ಬಂದಿದೆ. 400 ಸೀಟು ಗೆದ್ದರೆ ಸಂವಿಧಾನವನ್ನೇ ಬದಲಾಯಿಸಬಹುದು ಅನ್ನೋ ವಿರೋಧ ಪಕ್ಷಗಳ ಕೂಗನ್ನು, ಪ್ರಧಾನಿಗಳು ವಿರೋಧ ಪಕ್ಷಗಳ ಪ್ರಣಾಳಿಕೆಯನ್ನೇ ಪ್ರಶ್ನಿಸುವ ಮೂಲಕ ಚುನಾವಣೆಯ ರಂಗನ್ನು ಸ್ವಾರಸ್ಯಕರವಾಗಿಸಿರುತ್ತಾರೆ.
ಪ್ರಧಾನಿ ಅವರ ಭಾಷಣ ನನ್ನ ಪ್ರಕಾರ ಆತಂಕದ ಭಾಷಣವಾಗಿರಲಿಲ್ಲ ಅದು ಬಹಳ ಯೋಚನೆ ಮಾಡಿ ತೂಕದ ಭಾಷಣವಾಗಿತ್ತು, ವಿರೋಧ ಪಕ್ಷದವರ ಮನಸ್ಥಿತಿ ಅವರ ಅನಿಸಿಕೆ ಮತ್ತು ಹೇಗೆ ಸಂವಿಧಾನವನ್ನು ಅವರುಗಳು ಬಳಸಿಕೊಳ್ಳಬಹುದು ಅನ್ನೋ ಮಾದರಿಯ ಅವರ ಪ್ರಣಾಳಿಕೆಯನ್ನು ಬಿಚ್ಚಿಡುವ ತಂತ್ರ ಬಹುಶಹ: ಅವರದ್ದು ಆಗಿತ್ತು.
ಸಾಮಾನ್ಯ ಜನರಿಗೆ ಮರೆತು ಹೋದ ಆರ್ಥಿಕ ಸಮಾನತೆಯ ಒಂದು ಅಂಶವನ್ನು ಈಗ ಮತ್ತೆ ನೆನಪು ಮಾಡುವುದರಲ್ಲಿ ರಾಜಸ್ಥಾನದ ಪ್ರಧಾನಿ ಅವರ ಭಾಷಣ ಚುನಾವಣೆಗೆ ಒಂದು ಹೊಸ ದಿಕ್ಕನ್ನು ಕೊಟ್ಟಿದೆ.
ಮೊದಲಿಂದಲೂ ವಿರೋಧ ಪಕ್ಷ ನಾಯಕರು ತಮ್ಮ ಪ್ರಣಾಳಿಕೆಯ ಬಗ್ಗೆ ಸಾಕಷ್ಟು ಪತ್ರಿಕ ವರದಿಗಳನ್ನು ಮಾಡಿ ಹೇಗೆ ಭಾರತವನ್ನು ಹೊಸ ಹಾದಿಯಲ್ಲಿ ತೆಗೆದುಕೊಳ್ಳುವುದರಲ್ಲಿ ಈ ಒಂದು ಪ್ರಣಾಳಿಕೆ ಮಹತ್ತರವಾದದ್ದು ಅನ್ನು ಅವರ ಕೂಗನ್ನು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಅದೇ ಪ್ರಣಾಳಿಕೆಯನ್ನು ನೇರವಾಗಿ ಪ್ರಶ್ನಿಸುವುದರ ಮೂಲಕ ವಿರೋಧ ಪಕ್ಷಗಳ ಉದ್ದೇಶವನ್ನು ಬಯಲಿಗೆ ಇಟ್ಟಿದ್ದಾರೆ ಅನ್ನೋದು ಸಾಕಷ್ಟು ಸ್ಪಷ್ಟವಾಗಿದೆ. ಇದರಿಂದ ಜನರಿಗೆ ಇದ್ದ ಒಂದು ಸ್ವಲ್ಪ ಗೊಂದಲ ಕೂಡ ನಿವಾರಣೆಯಾಗಿದೆ ಅನ್ನೋದು ನಂಬಿಕೆ ಈಗ ಜನರಿಗೆ ಯಾವುದೇ ಸಂಕೋಚವಿಲ್ಲದೆ ಯಾವ ಕಡೆ ತಮ್ಮ ಮತವನ್ನು ಚಲಾಯಿಸಬೇಕು ಅನ್ನೋ ಸ್ಪಷ್ಟತೆ ಸಿಕ್ಕಿದೆ ಅನ್ನೋದೇ ಭಾಷಣದ ಹಿಂದೆ ಇರುವ ಲೆಕ್ಕಾಚಾರ. ಇದು ಯಾವ ಆತಂಕದ ಭಾಷಣ ಕೂಡ ಅಲ್ಲ, ಬದಲಿಗೆ ತಮ್ಮ 400ಕ್ಕೂ ಮೀರಿ ಅನ್ನೋ ಕೂಗಿಗೆ ಇನ್ನು ಶಕ್ತಿ ತುಂಬುವ ಭಾಷಣ ಅಂದರೆ ತಪ್ಪಾಗಲಾರದು.
ಆರ್ಥಿಕ ಸಮಾನತೆ ಜಾತಿ ಆಧಾರಿತ ಮೇಲೆ ನಿರ್ಧರಿಸುವುದು ಸರಿಯೇ ಅನ್ನೋ ಪ್ರಶ್ನೆಗೆ ಬಹುತೇಕ ಪ್ರತಿಷ್ಠಿತ ಯುನಿವರ್ಸಿಟಿಗಳು, ರಿಸರ್ಚ್ ಫೌಂಡೇಶನ್ ಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ನೀಡಿದ್ದಾರೆ ಆದರೂ ಸಹ ಸತತವಾಗಿ ವಿರೋಧ ಪಕ್ಷ ನಾಯಕರ ಭಾಷಣಗಳಲ್ಲಿ ಇದರ ಬಗ್ಗೆ ಉಲ್ಲೇಖ ವಿರುವುದು ಸ್ವಲ್ಪ ಆಶ್ಚರ್ಯದ ಸಂಗತಿ.
ಒಟ್ಟಾರೆ ಭಾಷಣದ ನಿಜವಾದ ಉದ್ದೇಶ ಏನೇ ಇರಬಹುದು ಆದರೆ ಆತಂಕದ ಭಾಷೆ ಹೌದಾ ಅನ್ನೋ ಪ್ರಶ್ನೆಗೆ ಕಡಾಖಂಡಿತವಾದ ಉತ್ತರ, ಇಲ್ಲ.